ಸರಳ ಜೀವಿ, ಜನನಾಯಕ,ಎಲ್ಲರ ಪ್ರೀತಿಯ ಮನೆ ಮಗ, ಯಾವುದೇ ಪ್ರತಿಫಲ ಬಯಸದೆ ಎಲ್ಲರೂ ಒಂದೇ ಎಂದು ತಿಳಿದು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯುವ ನಾಯಕ ಸಮಾಜ ಸೇವಕ ಸಾಮಾನ್ಯರಲ್ಲಿ ಅಸಮಾನ್ಯ ಸೇವಕ 'ಇಮ್ರಾಜ್' .
ತಂದೆ ಬಸ್ ಏಜೆಂಟ್ ಆಗಿದ್ದು ಸಾಮಾನ್ಯ ಕುಟುಂಬಕ್ಕೆ ಸೇರಿದ ಇಮ್ರಾಜ್ ವಿಧ್ಯಾಭ್ಯಾಸದಲ್ಲಿ ಬಿ.ಎ. ಪದವಿ ಪಡೆದು ಕಾಲೇಜು ದಿನಗಳಲ್ಲೇ ಸಮಾಜ ಮುಖಿ ಕಾರ್ಯಗಳನ್ನ ಮೈಗೂಡಿಸಿಕೊಂಡಿದ್ದ ಸಮಾಜ ಚಿಂತಕ. ಇದೇ ಸಂದರ್ಭದಲ್ಲಿ BMS ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾ
ಯಿತ ಅಭ್ಯರ್ಥಿ ಯಾಗಿ , ABVP ಸಂಘದ ಪ್ರತಿನಿಧಿಯಾಗಿ ,ಸಂಚಾಲಕನಾಗಿ,ಕಾರ್ಯದರ್ಶಿಯಾಗಿ ಹಾಗು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡು ನಂತರ ಟಿಪ್ಪು ಸುಲ್ತಾನ್ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಆಯ್ಕೆಯಾದರು.
ಶಾಶ್ವತ ನೀರಾವರಿ ಹೋರಾಟಕ್ಕಾಗಿಯು ಶ್ರಮಿಸಿದರು.
ಹುಳಿಯಾರನ್ನ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತಿರುವವರಲ್ಲಿ ಇಮ್ರಾಜ್ ಹೆಸರು ಮುಂಚೂಣಿಯಲ್ಲಿದೆ. ಇವರ ಇಂತಹ ಹತ್ತು ಹಲವುಕೆಲಸಗಳನ್ನು ಗುರುತಿಸಿದ ಜನರು ಇವರ ತಾಯಿಯನ್ನು ಗ್ರಾಪಂ ಸದಸ್ಯೆಯಾಗಿ ಆಯ್ಕೆ ಮಾಡಿದರು.ಇದು ಇಮ್ರಾಜ್ ರವರ ವ್ಯಕ್ತಿತ್ವವನ್ನ ತೋರಿಸುತ್ತದೆ.ತನ್ನ ಜೀವನವನ್ನು ಜನ ಸೇವೆಗಾಗಿಯೇ ಮೀಸಲಿಟ್ಟಿರುವ ಇಮ್ರಾಜ್ ರ ಕಾರ್ಯಗಳು ಜನರಿಗೆ ಬಹಳ ಅನುಕೂಲ ಮಾಡಿಕೊಡುಟ್ಟಿವೆ,
ವಿಧವಾ ವೇತನ,ವೃದ್ಧಾಪ್ಯ ವೇತನ,ಪಡಿತರ ಚೀಟಿ, ಆಧಾರ್ ಕಾರ್ಡ್, ಹಾಗೂ ಶವ ಸಂಸ್ಕಾರ ,ವಿಕಲ ಚೇತನ,ಶಾದಿಭಾಗ್ಯ,ವಿದ್ಯಾರ್ಥಿ ವೇತನ, ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಪರಿಚಯಿಸಿದ್ದು , ಉಚಿತ ಗ್ಯಾಸ್ ವಿತರಣೆ,ಪ್ರಧಾನಮಂತ್ರಿ ಅವರ 0 A/c ಬ್ಯಾಲೆನ್ಸ್ ಸುಮಾರು 300
ಮಾಡಿಸಿ,ನಾಗರೀಕರಿಗೆ ಬ್ಯಾಂಕ್ ನ ಪ್ರಜ್ಞೆ ಮೂಡಿಸಿದರು ಮುಂತಾದ ಸರ್ಕಾರಿ ಸವಲತ್ತುಗಳನ್ನ ಜನರಿಗೆ ತಲುಪಿಸುವಲ್ಲಿ ಯಶಸ್ವಿ ಆಗಿದ್ದಾರೆ. ಮತ್ತು ಉರ್ದು ಶಾಲೆ ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿಗಾಗಿ ಹೋರಾಟ, RMS ಯೋಜನೆಡಿಯಲ್ಲಿ ಉರ್ದು ಶಾಲೆಗೆ 3 ರೂಮ್ ಗಳ ನಿರ್ಮಾಣ ಮತ್ತು ಕಲಾ ವೇದಿಕೆ ಹಾಗು ಮುಸ್ಲಿಂ ಸ್ಮಶಾನದಲ್ಲಿ ತಂಗುದಾಣ, CC ರೋಡ್ ನಿರ್ಮಾಣ, ಹೀಗೆ ವಿವಿಧ ರೀತಿಯ ಪ್ರಯೋಜನ ಸವಲತ್ತುಗಳನ್ನ ಸಮಾಜಕ್ಕಾಗಿ ನೀಡುವಲ್ಲಿ ಇಮ್ರಾಜ್ ರವರ ಶ್ರಮ ಶ್ಲಾಘನೀಯ.
ಹೀಗೆ ದೇಶ ಸೇವೆ ಈಶ ಸೇವೆ ಎಂದು ಬದುಕತ್ತಿರುವ ಗೆಳೆಯ ಇಮ್ರಾಜ್ ರ ಸಾಧನೆಗಳು ಕೆಲ ಜನಪ್ರತಿನಿಧಿಗಳನ್ನು ನಾಚಿಸುತ್ತದೆ.
ಸಮಾಜಕ್ಕೆ ಇವರಿಂದ ಇನ್ನು ಒಳ್ಳೆಯ ಕೆಲಸಗಳು ನಡೆಯುತ್ತಿರಲಿ.